ಸಂದೀಪನ ಗುರುಭಕ್ತಿ

ಸಂದೀಪನ ಗುರುಭಕ್ತಿ
ಹಿಂದೆ ಸಂದೀಪ ಎನ್ನುವವನು ವಿದ್ಯಾರ್ಜನೆಗಾಗಿ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿದ್ದ. ಹೀಗಿರಲು ಒಮ್ಮೆ ಗುರುಗಳಿಗೆ ತಮ್ಮ ಶಿಷ್ಯರನ್ನು ಪರೀಕ್ಷಿಸಬೇಕೆಂಬ ಮನಸ್ಸಾಯಿತು.ಅವರು ತಮ್ಮ ಶಿಷ್ಯಂದಿರನ್ನು ಬಳಿಗೆ ಕರೆದು "ನನಗೆ ಕಾಶಿಗೆ ಹೋಗಬೇಕೆಂಬ ಮನಸ್ಸಾಗಿದೆ.ನನಗೆ ಖಾಯಿಲೆಯೂ ಕಾಡುತ್ತಿದೆ."ಎಂದರು.ಆಗ ಅವರ ಶಿಷ್ಯರೆಲ್ಲರೂ ಎಲ್ಲಿ ತಮ್ಮನ್ನು ಗುರುಗಳ ಜೊತೆಗೆ ಬರಲು ತಿಳಿಸುತ್ತಾರೋ ಎಂದು ಹೆದರಿದರು.ಅವರಾರಿಗೂ ಗುರುಗಳ ಸೇವೆ ಮಾಡಿಕೊಂಡಿರಲು ಇಷ್ಟವಿರಲಿಲ್ಲ.
ಆದರೆ ಸಂದೀಪ ಮಾತ್ರ ಗುರುಗಳ ಜೊತೆ ಕಾಶಿಗೆ ಹೋಗಲು ಸಿದ್ಧನಾದ.ಕಾಶಿಯಲ್ಲಿ ಗುರುಗಳ ಸೇವೆಯನ್ನು ಮಾಡುತ್ತಿದ್ದ.ಭಿಕ್ಷಾಟನೆಗೆ ಹೋಗಿ ಆಹಾರವನ್ನು ತರುತ್ತಿದ್ದ.ಮತ್ತು ಗುರುಗಳ ಗಾಯಗಳಿಗೆ ಮದ್ದು ಹಚ್ಚಿ ಆರೈಕೆ ಮಾಡುತ್ತಿದ್ದ.ಗುರುಗಳು ಎಷ್ಟೇ ಸಿಟ್ಟು ಮಾಡಿಕೊಂಡರೂ ಬೇಸರ ಮಾಡಿಕೊಳ್ಳದೆ ಅವರ ಆರೈಕೆ ಮಾಡುತ್ತಿದ್ದ.
ಅವನ ಗುರುಸೇವೆಯಿಂದ ಸಾಕ್ಷಾತ್ ಪರಶಿವನೇ ಸಂತುಷ್ಟನಾಗಿ ವರವನ್ನು ನೀಡಲು ಬಂದನು.ಆಗ ಸಂದೀಪನು ವಿನೀತನಾಗಿ ತಾನು ಗುರುಗಳ ಬಳಿ ಕೇಳಿ ಹೇಳುವುದಾಗಿ ತಿಳಿಸಿದ.ಆದರೆ ವಿಷಯ ತಿಳಿದ ಗುರುಗಳು ಸಂದೀಪನನ್ನೇ ಮೂದಲಿಸಿ ಸುಳ್ಳು ಹೇಳಿದಕ್ಕಾಗಿ ಹೊಡೆದು ಅಟ್ಟಿದರು.ಆದರೆ ಸಂದೀಪ ಪರಶಿವನ ಬಳಿ ಬಂದು ತನ್ನ ಗುರುಗಳ ಖಾಯಿಲೆ ವಾಸಿಯಾಗುವಂತೆ ಅನುಗ್ರಹಿಸಲು ಬೇಡಿಕೊಂಡ.ಆದರೆ ನಡೆದಿದ್ದನ್ನು ಮೊದಲೇ ಅರಿತ್ತಿದ್ದ ಪರಶಿವನು ಸಂದೀಪನ ನಿಷ್ಕಲ್ಮಶ ಗುರುಭಕ್ತಿಗೆ ಮೆಚ್ಚಿ ಅವನು ಕೇಳಿದ ವರವನ್ನೂ ಮತ್ತು ಆತನಿಗೆ ಸಕಲ ಸಂಪತ್ತನ್ನೂ ನೀಡಿದ.
ನೀತಿ:ಗುರುಭಕ್ತಿಯು ದೇವಭಕ್ತಿಗೆ ಸಮನಾದದ್ದು.
 
 *****************ಕೃಪೆ: ಆಸೆ ಬ್ಲಾಗ್*****************

ಕಾಮೆಂಟ್‌ಗಳಿಲ್ಲ: